ಗಾಜಿನ ಅರಮನೆ

ತೋಟದಲ್ಲಿ ತಿರುಗುವಾಗ ಭುಜವೇರಿ ಬಂದಿತ್ತು ಒಂದು ಕಂಬಳಿ ಹುಳು. ಮೈ ನವೆ ತಡೆಯಲಾರದೆ ಸಿಟ್ಟಿನಿಂದ ಕಂಬಳಿ ಹುಳುವನ್ನು ಒಂದು ಸೀಸೆಯಲ್ಲಿ ಹಾಕಿ ಬಂಧಿಸಿಟ್ಟ ತೋಟದ ಮಾಲಿ. ಗಿಡಗಳಿಗೆ ನೀರು ಹಾಕುವಾಗ ಕನಿಕರ ಗೊಂಡು ನಾಲಕ್ಕು ಎಲೆ ಆಹಾರ ಹಾಕಿ ದಿನವೂ ನೋಡುತ್ತಿದ್ದ. ಹಲವು ದಿನದೊಳಗೆ ಕಂಬಳಿ ಹುಳು ಚಿಟ್ಟೆಯಾಯಿತು. ಕಪ್ಪು ಕಂಬಳಿಯ ಬಿಟ್ಟು ರಂಗುರಂಗಿನ ರೆಕ್ಕೆ ಹೊದ್ದಿತು. ಪಟಪಟ ರೆಕ್ಕೆ ಬಡಿಯಿತು. ತನ್ನ ರೆಕ್ಕೆ ಸಾಗರ ಭೂಮಿ ಮುಟ್ಟಿದೆ ಎಂದು ಸಂತಸ ಪಟ್ಟಿತು. ತಾನಿರುವಲ್ಲಿಗೆ ಸೂರ್‍ಯ, ಚಂದ್ರ, ಗಾಳಿ, ಆಗಸ ಎಲ್ಲವೂ ಬರುತ್ತಿದೆ, ಎಂಬ ಭ್ರಮೆಯಲ್ಲಿತ್ತು. ಗಾಜಿನ ಮನೆಯ ಬಂಧನದ ಅರಿವು ಅದಕ್ಕೆ ಇರಲಿಲ್ಲ.

ಗಾಜಿನ ಬಾಟಲಿನಲ್ಲಿ ಹಾರುತ್ತಿದ್ದ ಚಿಟ್ಟೆಯನ್ನು ನೋಡಿ ತೋಟದ ಮಾಲಿ ಅದರ ಬಾಯಿಗೆ ಬಿರಟೆ ಇಟ್ಟ. ಚಿಟ್ಟೆ ಚೀರಿತು.

“ಇದೇನು ನಾ ಕಂಡ ಆಗಸ, ಭೂಮಿ, ಸೂರ್‍ಯ ಚಂದ್ರರೆ ನನ್ನ ಉಸುರು ಕಟ್ಟಿಸುತ್ತಿದ್ದಾರೆ” ಎಂದುಕೊಂಡಿತು. ಉಸುರು ಕಟ್ಟಿ ಸಾಯುವಾಗ ಮಾಲಿ ಮಾತು ಕೇಳಿಸಿತು.

“ಗಾಜಿನ ಅರಮನೆ ಹೇಗಿದೆ?” ಎಂದು. ಆಗ ಚಿಟ್ಟೆಗೆ ಜ್ಞಾನೋದಯವಾಯಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಂಗಾರು
Next post ಐರಿಷ್ ವೈಮಾನಿಕನ ಹಾಡು

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…